ಪ್ರೋ ಎಸ್. ವಿ. ಉದಯ ಕುಮಾರ ಶೆಟ್ಟಿಯವರಿಗೆ ರಾಜ್ಯ ಮಟ್ಟದ ಸಹೃದಯ ಪ್ರಶಸ್ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಡಿಸೆ೦ಬರ್ 31 , 2015
|
ಡಿಸೆ೦ಬರ್ 31, 2015
|
ಪ್ರೋ ಎಸ್. ವಿ. ಉದಯ ಕುಮಾರ ಶೆಟ್ಟಿಯವರಿಗೆ ರಾಜ್ಯ ಮಟ್ಟದ ಸಹೃದಯ ಪ್ರಶಸ್ತಿ
ಸಾಗರ :
ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕ ಯಕ್ಷಗಾನ ಬಾಗವತ ಕಲಾವಿದ, ವಿಮರ್ಶಕ ಲೇಖಕ ಎಸ್. ವಿ. ಉದಯಕುಮಾರ ಶೆಟ್ಟರಿಗೆ ಸಾಗರದ ಸಹೃದಯ ಬಳಗ, ಮತ್ತು ಇತಿಹಾಸ ವೇದಿಕೆ ನೀಡುವ ರಾಜ್ಯಮಟ್ತದ ಸಹೃದಯ ಪ್ರಶಸ್ತಿ ನೀಡಲಾಗಿದೆ ರಾಜ್ಯಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹತ್ತು ಜನ ಗಣ್ಯರಲ್ಲಿ ಯಕ್ಷಗಾನ ಕ್ಷೇತ್ರದ ಸಾದನೆಗಾಗಿ ಶೆಟ್ಟರಿಗೆ ಈ ಪ್ರಶಸ್ತಿ ಸಂದಿದೆ. 2016ರ ಸಾಲಿನ ಈ ಪ್ರಶಸ್ತಿಯನ್ನು ಜನವರಿ 2ರಂದು ಸಾಗರದಲ್ಲಿ ನೆಡೆಯುವ ಸಾಗರೋತ್ಸವದಲ್ಲಿ ಹಿರಿಯ ಕವಿ ನಾ. ಡಿಸೋಜ ಅವರು ಪ್ರದಾನ ಮಾಡಲಿದ್ದಾರೆ.
ಎಸ್. ವಿ ಉದಯ ಕುಮಾರ ಶೆಟ್ಟರು ಆಕಾಶವಾಣಿ ದೂರದರ್ಶನದ ಕಲಾವಿದರಾಗಿದ್ದು ಹಲವಾರು ಆಟ ಕೂಟಗಳಲ್ಲಿ ಕಳೆದ 40 ವರ್ಷದಿಂದ ಬಾಗವತರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಅವರ ಹಲವಾರು ಯಕ್ಷಗಾನ ಸಂಬಂದಿ ಲೇಖನಗಳು ನೂರಾರು ಕಲಾವಿದರ ಪರಿಚಯ ಲೇಖನಗಳು ನಾಡಿನ ಅನೇಕ ಪತ್ರಿಗಳಲ್ಲಿ ಕಳೆದ 25 ವರ್ಷಗಳಿಂದ ಪ್ರಕಟಗೊಂಡಿದೆ. ಕರಾವಳಿ ಬಂಟರ ಬಳಗ ಪತ್ರಿಕೆಯ ಗೌರವ ಸಂಪಾದಕರಾದ ಇವರಿಗೆ 2008ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2009ರ ಯಕ್ಷಶ್ರೀ ಪ್ರಶಸ್ತಿ. 2006ರ ಸೀತಾನದಿ ಪ್ರಶಸ್ತಿ ಹಾಗೂ 2013ರ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳು ಸಂದಿವೆ.
|
|
|